ಬಿಸಿಲ ನಾಡಿನ ಬೇಸಿಗೆ

ಆಡಿ ಹಗುರವಾಗಲೇನಲ್ಲ! ನಿಜ!
ಕೇಳಿ ಬಿಸಿಲ ನಾಡಿನ ಬವಣೆ.

ರವಿ
ಹತ್ತಿರವೆ ಸರಿದವನಂತೆ
ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ
ಉಳಿದಂತೆ ಬೆಂಕಿ ಬಿಸಿಲನು ಕಾರಿ
ಕಾಲಗಳ ಕತ್ತು ಹಿಸುಕಿ
ಜೀವಗಳ ಜೀವಂತ ಬೇಯಿಸುವನು.

ಗಾಳಿ
ಎಲ್ಲೋ ಬಂಧಿಯಾಗಿ
ಸುಳಿಯದೆ
ಜೀವಕ್ಕೆ ಬಿಸಿಲ ಜ್ವರ ಬಡಿಸಿ
ಮೈ ಮನ ಕೆಂಡ ಮಾಡಿ
ಆಂತಿಕಾವಸ್ಥೆ ತಲುಪಿಸಿ
ನರಳಾಡಿಸುವುದು.

ಧಗೆ.
ಹೊರಗೂ ಒಳಗೂ ತಕ್ಕೈಸಿ
ನೆಲ್ಲು ಕಣ ಮಾಡುವಾಗ ಹಾರಿ
ಬೆವರಿಳಿವ ಮೈಯನ್ನೇರಿ ಕಚ್ಚುವ
ಅಸಾಧ್ಯ ತುರಿಕೆ ತರುವ ಸುಂಕಿನಂತೆ
ಜೀವ ಕಸಿವಿಸಿಗೊಳಿಸುವುದು.

ಗಿಡ ಮರಗಳು
ಮಾಟಕ್ಕೆ ಮಣಿದವರಂತೆ
ಸ್ಥಬ್ದವಾಗಿ
ಸೂತಕದ ಮನೆಯ ಜನರಂತೆ
ಅರಕ್ತ ಮುಖವ ಹೊತ್ತು
ಚಿತ್ರದಂತೆ ನಿಂತು ಕೊಲ್ಲುವವು.

ಬೆಟ್ಟ ಗುಡ್ಡಗಳು
ಅರುಣನ ವಿಕಟ ಅಟ್ಟಹಾಸಕ್ಕೆ ಶರಣಾಗಿ
ಬೆಂಕಿ ಉಂಡೆಗಳಾಗಿ
ಅಸ್ತವಾದ ಬಹು ಹೊತ್ತಿನವರೆಗೂ ಕಾವು ಕಕ್ಕಿ
ಜೀವಕ್ಕೆ ತಹತಹಿಕೆ ತರುವವು.

ಮಣ್ಣು
ನಿರುಪಾಯವಾಗಿ
ನಿರ್ದಯ ರವಿಯು ಕಾರುವ ಎಲ್ಲಾ ಉರಿ ಹೀರಿ
ಬಿರಿದು ಧೂಳಾಗಿ, ಮೇಲೇರಿ
ಒಡಲೊಳಗಿನ ಉರಿಯನ್ನು ಸೇರಿಸಿ
ಪರಿಸರ ಪೂರ ಕುಂಬಾರನ ಆವಿಗೆಯ ಮಾಡಿ
ಜೀವದ ಸಮಾಧಾನ ಕೆಡಿಸುವುದು.

ತಾಯಿ ತುಂಗಭದ್ರೆ
ದುರ್ಭರ ಬದುಕಿನ ಬೇಗೆಯಲಿ ಬೆಂದ ಜೀವದಂತೆ
ಬಲ, ಚೆಲುವು ಸೋರಿಹೋಗಿ.
ಅಸ್ಥಿ ಪಂಜರದಂತೆ ವಿಕಾರವಾಗಿ
ಧಿಗ್ಗನೆ ಎದುರಾದರೆ ಹೃದಯ ಸ್ಥಂಭಿಸುವ
ಭೂತದಂತಾಗಿದ್ದಾಳೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿಬಲ
Next post ಹಾಗೂ ಹೀಗೂ ದಿನದ ಗುಣವೇ ಕುಸಿದಿರಲಿನ್ನೆನ್ನದೇನು ?

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys